Wednesday, October 15, 2014

ಎಲ್ಲೋ ಆರಂಭವಾದ ಒಂದು ಸಣ್ಣ ಒರತೆ
ಹನಿ ಹನಿಗೂಡಿ ತೊರೆಯಾಗಿದೆ
ಕಾಡುಮೇಡುಗಳ ಸುತ್ತಿ
ಧುಮ್ಮಿಕ್ಕುತಾ ಹಾಲಿನ ಹೊಳೆಯಂತೆ
ಹರಿದಿದೆ ಸ್ವಚ್ಚಂದವಾಗಿ

ಮೀಯಬೇಕಿದೆ ಈ ತೊರೆಯ ನೀರಲ್ಲಿ
ತೊಳೆದುಕೊಳ್ಳಬೇಕಿದೆ ಆ ಎಲ್ಲ ಪಾಪಗಳ
ಮನೆ, ಹಳ್ಳಿ ಊರು ಕಟ್ಟಲು
ಕಡಿದು ಕೊಂದ ಮರಗಳ ತಾಪವ
ಅಣೆಕಟ್ಟೆ ಕಟ್ಟಿ ಎಲ್ಲಿಂದ ಎಲ್ಲಿಗೋ
ತಿರುವಿದ ನದಿಗಳ ಶಾಪವ

ಬಿಡಲಾರೆವೆ ನಾವು ಪ್ರಕೃತಿಯ
ಸ್ವಚ್ಚಂದವಾಗಿ ಸೃಷ್ಟಿಯ ಆಸೆಯಂತೆ?
ಮಾಡಲೇ ಬೇಕೇ  ಬಲಾತ್ಕಾರ
ಯಾರೂ ಅರಿಯದ ಭವಿಷ್ಯಕ್ಕಾಗಿ?


No comments:

Post a Comment