Friday, June 6, 2014

ಬೇಸಾಯ

 
ಶುರವಾಗಲಿದೆ ಮಳೆಗಾಲ
ಶುರವಾಗಲಿದೆ ಬೇಸಾಯ 
ಬೆಳ್ಳಂ ಬೆಳಿಗ್ಗೆ ಐದಕ್ಕೆ ಎದ್ದು 
ಬಿಚ್ಚಿ ಎತ್ತಿನ ಹಗ್ಗ
ಹಾಕಿಕೊಂಡು ಹೆಗಲ ಮೇಲೆ ನೊಗ 
ಹೊರಟು ನಿಂತರೆ ಗದ್ದೆಗೆ 
ಕೆಂಪ ಎಡಕ್ಕೆ ಕೌಲ ಬಲಕ್ಕೆ
ಹೊಡೆದು ಹೊಳಕೆ ನಿಲ್ಲಿಸು ಹೊತ್ತಿಗೆ 
ಬಿಸಿ ಬಿಸಿ ಹಲಸಿನ ಹಣ್ಣಿನ ಕಡುಬು ಹೊಟ್ಟೆಗೆ
ಬೀಜ ಬಿತ್ತಿ, ನೀರು ಕಟ್ಟಿ,
ಅಂಚು ಕಡಿದು, ಬೇಲಿ ಹಾಕಿ,
ತಿಂಗಳು ಕಳೆದು ಸಸಿ ಕೀಳಿಸಿ
ನಾಗಿ, ಶಾರದ, ಕಮಲ ಗೌರಿಯರ ಕರೆಸಿ 
ನೆಟ್ಟಿ ಮಾಡಿ ಮುಗಿಸಿ
ಉಸಿರ ಬಿಡುವಷ್ಟರಲ್ಲಿ 
ಬಂತು ಕಳೆ ಕೀಳುವ ಸಮಯ
ದೋ ಎಂದು ಸುರಿವ ಮಳೆಯಲಿ 
ಜಾರು ಗುಡ್ಡದಲ್ಲಿ ಹೊತ್ತು ತಂದು 
ಗೊಬ್ಬರ ಹಾಕಿ ಬೆಳೆಸಿ ಮತ್ತೆ ಮಳೆಗೆ ಕಾದು
ಹುಳಕೆ ಔಷದಿ ಸ್ಪ್ರೆಯ್ ಮಾಡಿ
ಅಂತೂ ತೆನೆ ತುಂಬಿತು ಹಾಲು
ಅಷ್ಟರಲ್ಲಿ ಬರುವವು ಹಂದಿಯ ಹಿಂಡು
ಓಡಿಸಲು ಹಾಕಿಕೊಂಡು ಮಚ್ಚಿಗೆ ಕಾದು ರಾತ್ರಿಯೆಲ್ಲ
ಷ್ರಷ್ಟಿ ದಿನ ಪೂಜೆಮಾಡಿ ತಂದು
ಪಾಯಸದೊಂದಿಗೆ ಹೊಸತು ಊಟವ ಮಾಡಿ 
ಜೊತೆ ಜೊತೆಯಲ್ಲಿ ಬಂತು ನೋಡಿ ಹಬ್ಬಗಳ ಸಾಲು 
ಅತ್ತ ಗದ್ದೆಯಲಿ ಬೆಳೆದು ನಿಂತಿದೆ ಬತ್ತ
ಕರೆದು ನಾಲ್ಕಾರು ಆಳುಗಳ ಜೊತೆ 
ಕುಯಿಲು ಮಾಡಿ ತಂದು ಕಣದಲ್ಲಿ ಗೊಣಬೆ ಹಾಕಿ
ಒಕ್ಲಾಟ ಮಾಡಿ ಮುಗಿಸುವಷ್ಟರಲಿ
ಸಾಕೋ ಸಾಕು..

No comments:

Post a Comment