ಓ ಹೆಣ್ಣೇ ಬೀಳಬೇಡ ಹಟಕ್ಕೆ
ಎಷ್ಟೇ ಹೇಳಿದರು ರಾಮ
ಕೇಳಲಿಲ್ಲ ಬರಬೇಡ ವನವಾಸಕ್ಕೆಂದು
ಹೊರಟು ನಿಂತಳು ಜೊತೆಯಲ್ಲೇ
ಕಷ್ಟದ ಅರಿವಿಲ್ಲದೇ ಅವಳಿಗೆ
ತೊರೆದು ಸುಖ ಸುಪ್ಪತ್ತಿಗೆಗಳ
ಬಿಡಲಿಲ್ಲ ಅಲ್ಲಿಯೂ ಹಿಡಿದಳು ರಚ್ಚೆ
ಬೇಕೆನಗೆ ಮಾಯಾಜಿಂಕೆ
ಕಾವಲಿಗಿದ್ದ ಲಕ್ಷ್ಮಣನನ್ನೂ
ಓಡಿಸಿದಳು ಅವನ ಮಾತೂ ಕೇಳದೆ
ಅಷ್ಟೂ ಸಾಲದೇ ದಾಟಿ ಹೊರಬಂದಳು
ಲಕ್ಷಣನು ಹಾಕಿದಾ ರೇಖೆಯ
ಹೊರಟನು ರಾಮ ಹುಡುಕಲು,
ಕೊಲ್ಲ ಬೇಕಾಯಿತು ವಾಲಿಯ ಅಡಗಿ ಮರದ ಹಿಂದೆ
ವಾನರರ ಜೊತೆಗೂಡಿ ಕಟ್ಟಿದನು ಸೇತುವೆ
ನಡೆಯಿತು ಯುದ್ಧ, ಆಯಿತು ಸಾವು ನೋವು
ಇಂದ್ರಜಿತು, ಕುಂಭಕರ್ಣ, ರಾವಣರ ಅಳಿವು
ಎಲ್ಲವೂ ನಡೆದದ್ದು ಒಂದು ಹೆಣ್ಣು ಮಾತು ಕೇಳದ್ದಿದ್ದರಿಂದಲ್ಲವೇ?
ಅಂದು ಸೀತೆ ಹಿಡಿಯದಿದ್ದರೆ ಪಟ್ಟು
ಇರುತಿತ್ತೆ ರಾಮನಿಗೆ ಇಷ್ಟೆಲ್ಲಾ ಕಷ್ಟ
ಬರುತ್ತಿತ್ತೆ ಪತ್ನಿ ಅನುಮಾನಿಸಿದ ಪಟ್ಟ
ಓ ಹೆಣ್ಣೇ ಬೀಳಬೇಡ ಹಟಕ್ಕೆ
No comments:
Post a Comment